Showing posts with label ಕೃಷ್ಣ ಮೂರ್ತಿ ಹರಪನಹಳ್ಳಿ. Show all posts
Showing posts with label ಕೃಷ್ಣ ಮೂರ್ತಿ ಹರಪನಹಳ್ಳಿ. Show all posts

Monday, December 7, 2009

ಕನ್ನಡ ಚುಟಕಗಳು

ವರ-ಲಕ್ಷ್ಮಿ
ವರಲಕ್ಷ್ಮಿ ಎಂಬ ಹುಡುಗಿಯ
ನೊಡಲು ಬಂದ ವರವರಧಕ್ಷಿಣೆಯ ಮಾತೆತ್ತಿದಾಗ
ನಮ್ಮ ಹುಡುಗಿ
ವರನಿಗೆ ನಾನೆ ಲಕ್ಷ್ಮಿಯಾಗಿರುವಾಗ
ಧಕ್ಷಿಣೆಯ ಮಾತೆ ಎಕೆ? ಎನ್ನಬೇಕೆ!

ಸೂಟು, ಬೂಟು ಮತ್ತು ಸೌಟು
ಮದುವೆಯ ಮನೆಯಲ್ಲಿ ಮಾವ
ಕೊಟ್ಟ ಸೂಟು, ಬೂಟು
ನಂತರ ಹೆಂಡತಿ ಕೈಗೆ
ಕೊಟ್ಲು ಬಾಂಡ್ಲೆ ಸೌಟು

ರಾಷ್ಟ್ರ-ಪತಿ

ಎಲ್ಲಾರು ಮದುವೆ ಆದಮೇಲೆ
ಸತಿ-ಪತಿ
ಅದರೆ ಬ್ರಹ್ಮಚಾರಿ ಕಲಾಂ
ರಾಷ್ಟ್ರಕ್ಕೆ ಪತಿ!

- ಕೃಷ್ಣ ಮೂರ್ತಿ ಹರಪನಹಳ್ಳಿ
( ವಿದ್ಯಾಶಂಕರ್ ಹರಪನಹಳ್ಳಿಯವರ ತಂದೆ)