ಪುಟ್ಟನ ಪ್ರಶ್ನೆ
ಫಿಲ್ಟರ್ ನೀರು ಮಿನೆರಲ್ ವಾಟರ್
ಕೂಡಿಸಿ ಬೆಳಸಿನೆಂದು
ಜಂಭ ಕೊಚ್ಚಿದ ಅಪ್ಪನಿಗೆ
ಪುಟ್ಟನು ಕೇಳಿದ
ಇಷ್ಟೆಲ್ಲಾ ಪರಿಸರ ಹಾಳು ಮಾಡಿದ್ದು ಯಾರು?
ಮರ್ಯಾದೆಯ ಪ್ರಶ್ನೆ
ತಲೆಕೆಟ್ಟ ರಾವಣ ನನ್ನ ಹೆಂಡತಿಯ
ಹೊತ್ತ್ಯುದಾಗ ಯುದ್ಧ ಮಾಡಿ ಬಿಡಿಸಿಕೊಂಡು ಬಂದೆ
ಏಕೆಂದರೆ ಅದು ಮರ್ಯಾದೆಯ ಪ್ರಶ್ನೆ!
ಅಗಸನ ಮಾತಿಗೆ ಪ್ರಜಾ ಆರೋಪಕ್ಕೆ ಅಂಜಿ
ಮತ್ತೆ ಬಸರಿ ಹೆಂಡತಿಯ ಕಾಡಿಗೆ ಕಳುಹಿಸಿದೆ
ಏಕೆಂದರೆ ಅದು ಮರ್ಯಾದೆಯ ಪ್ರಶ್ನೆ !!
Showing posts with label ಹನಿಗವನಗಳು ಮರ್ಯಾದೆಯ ಪ್ರಶ್ನೆ ಪುಟ್ಟನ ಪ್ರಶ್ನೆ ವಿದ್ಯಾಶಂಕರ್ ಹರಪನಹಳ್ಳಿ. Show all posts
Showing posts with label ಹನಿಗವನಗಳು ಮರ್ಯಾದೆಯ ಪ್ರಶ್ನೆ ಪುಟ್ಟನ ಪ್ರಶ್ನೆ ವಿದ್ಯಾಶಂಕರ್ ಹರಪನಹಳ್ಳಿ. Show all posts
Sunday, August 9, 2009
Subscribe to:
Posts (Atom)
